ಚಳಿಗಾಲಕ್ಕೆ ಹೋಲಿಸಿದರೆ ಬೇಸಿಗೆ ಕಾಲದಲ್ಲಿ ಕಡಿಮೆ ತಿನ್ನುತ್ತೇವೆ. ಈ ಸಮಯದಲ್ಲಿ ಹೆಚ್ಚಾಗಿ ನೀರು ಹೊಂದಿರುವ ಹಣ್ಣು, ತರಕಾರಿಗಳು ಸೇವನೆ ಮಾಡುವುದು ಒಳ್ಳೆಯದು. ಹೆಚ್ಚೆಚ್ಚು ಆಹಾರಗಳ ಸೇವನೆ ಬೇಡವೇ ಬೇಡ ಎಂಬ ಭಾವನೆಯನ್ನು ಬೇಸಿಗೆ ಕಾಲ ಸೃಷ್ಟಿಸುತ್ತದೆ.
ಹಾಗಾದರೆ ಬೇಸಿಗೆ ಕಾಲದ ದಿನಚರಿಯಲ್ಲಿ ಎಂತಹ ಆಹಾರ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ ಓದಿ.
ಋತುಮಾನಕ್ಕೆ ತಕ್ಕಂತೆ ಹಣ್ಣುಗಳ ಸೇವನೆ:
ಮುಖ್ಯವಾಗಿ ಆರೋಗ್ಯದ ದೃಷ್ಟಿಯಿಂದ ಋತುಮಾನಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಹಸಿರು ತರಕಾರಿಗಳು, ಕಲ್ಲಂಗಡಿ ಹಣ್ಣು, ಮಾವಿನ ಹಣ್ಣುಗಳನ್ನು ಸೇವನೆ ಮಾಡುವುದನ್ನು ಮರೆಯದಿರಿ.
ಇನ್ನು ಬೇಸಿಗೆಯಲ್ಲಿ ಹಣ್ಣುಗಳು ಹೇರಳವಾಗಿ ದೊರೆಯುತ್ತದೆ. ಇವುಗಳಲ್ಲಿ ವಿಟಮಿನ್ಗಳು, ಖನಿಜಗಳು ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಶ್ರೀಮಂತವಾಗಿರುತ್ತದೆ.
ಕಲ್ಲಂಗಡಿ:
ಆಕರ್ಷಕವಾದ ಬಣ್ಣವನ್ನು ಹೊಂದಿರುವ ಕಲ್ಲಂಗಡಿ ರಸಭರಿತವಾದ ಆಹಾರಗಳಲ್ಲಿ ಒಂದಾಗಿದೆ. ಇದು ಬೇಸಿಗೆಯ ಸಮಯದಲ್ಲಿ ಸೂಕ್ತವಾದ ಹಣ್ಣಾಗಿದೆ. ಇದರಲ್ಲಿ ಹೆಚ್ಚಿನ ಮಟ್ಟದ ನೀರನ್ನು ಹೊಂದಿದ್ದು, ನಿಮ್ಮ ಬಾಯಾರಿಕೆಯನ್ನು ತಣಿಸುತ್ತದೆ. ಕಲ್ಲಂಗಡಿ ಹಣ್ಣನ್ನು ಸಲಾಡ್ಗಳಲ್ಲಿ, ಸಿಹಿ ತಿಂಡಿಗಳಲ್ಲಿ, ಸ್ಮೂಥಿಗಳಲ್ಲಿ, ಮಿಲ್ಕ್ಶೇಕ್ಗಳಲ್ಲಿ ಸೇರಿಸಿ ಸೇವನೆ ಮಾಡಬಹುದು.
ಈ ರುಚಿಯಾದ ಹಣ್ಣು ಹೊಟ್ಟೆಯ ಅಸ್ವಸ್ಥತೆಗೆ, ತೂಕ ನಷ್ಟಕ್ಕೆ, ಸಾಮಾನ್ಯ ಶೀತ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಬಹಳ ಒಳ್ಳೆಯದು. ಅಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಇದಕ್ಕಿಂತ ಉತ್ತಮವಾದ ಹಣ್ಣು ಬೇರೊಂದಿಲ್ಲ.
ಸೋರೆಕಾಯಿ:
ಬಹಳಷ್ಟು ಮಂದಿ ಸೋರೆಕಾಯಿಯನ್ನು ಸೇವಿಸದೇ ಇರಬಹುದು. ಆದರೆ ಇದೊಂದು ಪೋಷಕಾಂಶವುಳ್ಳ ತರಕಾರಿ ಎಂಬುದನ್ನು ಮರೆಯುವಂತಿಲ್ಲ. ಅಲ್ಲದೆ, ತೂಕ ನಷ್ಟಕ್ಕೆ ಇದು ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಎ, ಸಿ ಮತ್ತು ಫೋಲೇಟ್ನಲ್ಲಿ ಶ್ರೀಮಂತವಾಗಿದೆ. ಈ ಸೋರೆಕಾಯಿಯನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ, ಅಧಿಕ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನು, ಇದು ಅತ್ಯುತ್ತಮವಾದ ರಕ್ತ ಶುದ್ಧೀಕಾರಕ ಕೂಡ ಆಗಿದೆ. ಹಾಗಾಗಿ ಸೋರೆಕಾಯಿಯನ್ನು ವರ್ಷವಿಡೀ ಸೇವನೆ ಮಾಡಿ.
ನಿಮ್ಮ ಸಲಾಡ್ನಲ್ಲಿ ಇವೆಲ್ಲ ಇರಲಿ:
ಅವರಂಥ್ ಎಲೆಗಳು, ತುಳಸಿ ಮತ್ತು ಬೇಸಿಗೆ ಗಿಡಮೂಲಿಕೆಗಳನ್ನು ಸಲಾಡ್ ನಲ್ಲಿ ಸೇರಿಸಬಹುದು. ಮೊಸರು ಮತ್ತು ಮಜ್ಜಿಗೆ ನಿಮ್ಮ ದಾಹವನ್ನು ತಣಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಮ್ಮ ಸಲಾಡ್ ನಲ್ಲಿ ತಾಜಾ ಹಣ್ಣುಗಳು, ಬೀಜಗಳು, ಬಿಳಿ ಮಾಂಸ, ಮೆಣಸುಗಳು ಪುದೀನ, ಕೊತ್ತಂಬರಿ ಸೊಪ್ಪುಗಳನ್ನು ಬೆರೆಸಿ ಲಘುವಾಗಿ ಸೇವನೆ ಮಾಡಿ.
ಕಲ್ಲಂಗಡಿ ಜ್ಯೂಸ್:
ಕಲ್ಲಂಗಡಿ ಹಣ್ಣಿನಲ್ಲಿ ಸರಿಸುಮಾರು 90 ಪ್ರತಿಶತದಷ್ಟು ನೀರು ಹೊಂದಿರುತ್ತದೆ. ನಿಸ್ಸಂದೇಹವಾಗಿ ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ. ಅಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಹೊಟ್ಟೆ ತಂಪಾಗಿರಿಸಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ, ಉತ್ತಮವಾದ ಮೈಬಣ್ಣ, ಮೊಡವೆ ಮುಕ್ತ ಚರ್ಮ ಪಡೆಯಲು ಕಲ್ಲಂಗಡಿ ಹಣ್ಣಿನ ಜ್ಯೂಸ್ ಸೂಕ್ತವಾಗಿದೆ.
ಮಾವಿನ ಪುಡಿಯ ಜ್ಯೂಸ್:
ಒಣ ಮಾವಿನ ಪುಡಿಯ ಜ್ಯೂಸ್ ಅಥವಾ ಪಾನೀಯ ಬೇಸಿಗೆಯಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಕರುಳಿನ ಸಮಸ್ಯೆಗಳು ಉಲ್ಬಣಗೊಳ್ಳದಂತೆ ಸಹಾಯ ಮಾಡುತ್ತದೆ.
ನಿಂಬೆ ರಸ:
ಬೇಸಿಗೆಯ ಅತ್ಯುತ್ತಮವಾದ ಪಾನೀಯವೆಂದೇ ಹೆಸರುವಾಸಿಯಾಗಿರುವ ನಿಂಬೆ ಹಣ್ಣು ಆರೋಗ್ಯದ ವಿಷಯದಲ್ಲಿ ಜಾದು ಮಾಡುತ್ತದೆ. ಪರಿಣಾಮಕಾರಿಯಾಗಿರಲು ನಿಂಬೆಯೊಂದಿಗೆ ಪುದೀನ ಎಲೆಗಳನ್ನು ಮಿಶ್ರಣ ಮಾಡಿದ ಜ್ಯೂಸ್ ಸೇವನೆ ಮಾಡಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸಿ, ಬೇಸಿಗೆಯಲ್ಲಿ ಹೊಟ್ಟೆ ತಂಪಾಗಿರುವಂತೆ ಮಾಡುತ್ತದೆ.
ಬಾರ್ಲಿ ನೀರು:
ರುಚಿಗೆ ಜೇನುತುಪ್ಪ ಬೆರೆಸಿದ ಬಾರ್ಲಿ ನೀರನ್ನು ಸೇವನೆ ಮಾಡುವುದು ಬೇಸಿಗೆಯ ಕಾಲದಲ್ಲಿ ಉತ್ತಮವಾದ ಆರೋಗ್ಯ ಫಲಿತಾಂಶವನ್ನು ಪಡೆಯಬಹುದು. ಏಕೆಂದರೆ ಬಾರ್ಲಿ ನೀರಿನಲ್ಲಿ ಫೈಬರ್ ಸಮೃದ್ಧವಾಗಿರುವ ಕಾರಣ, ಮಲಬದ್ಧತೆಯನ್ನು ತಡೆದು, ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
