ಯಾವುದೇ ಸಮಯದಲ್ಲಿ ಮನಸ್ಸು ಗೊಂದಲದಿಂದ ತುಂಬಿರುವಾಗ, ಅದನ್ನು ಸರಿಪಡಿಸಲು ಶ್ವಾಸವೇ ಮುಖ್ಯ ದಾರಿ. ಪ್ರಾಚೀನ ಯೋಗ ಜ್ಞಾನ ಪ್ರಕಾರ, ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಮೂಲಕ ಮನಸ್ಸನ್ನು ಶುದ್ಧಗೊಳಿಸಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಆಂತರಿಕ ಶಾಂತಿಯನ್ನು ಸಾಧಿಸಲು ಬಳಸಲಾಗುತ್ತದೆ.
ನಿತ್ಯ 10 ನಿಮಿಷ ಈ ಪ್ರಾಣಾಯಾಮ ತಂತ್ರಗಳನ್ನು ಅಭ್ಯಾಸ ಮಾಡಿದರೆ, ನೀವು ಗಮನ ಶಕ್ತಿ ಮತ್ತು ಚಿತ್ತದ ಶುದ್ಧತೆಗೆ ನೇರವಾಗಿ ಸಂಪರ್ಕ ಸಾಧಿಸಬಹುದು. ನಾವಿಂದು ಟಾಪ್ 5 ಶಕ್ತಿಶಾಲಿ ಪ್ರಾಣಾಯಾಮ ತಂತ್ರಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ.
ಇಲ್ಲಿವೆ 5 ಪ್ರಾಣಾಯಾಮಗಳು:
1. ಶೂನ್ಯಕ ಪ್ರಾಣಾಯಾಮ:
ಶೂನ್ಯಕ ಅಂದರೆ ಖಾಲಿ. ಈ ತಂತ್ರದಲ್ಲಿ, ನೀವು ಸಂಪೂರ್ಣವಾಗಿ ಉಸಿರು ಬಿಡುತ್ತಿರಿ ಮತ್ತು ಆಮೇಲೆ ಕೆಲವು ಕ್ಷಣ ಉಸಿರು ತೆಗೆದುಕೊಳ್ಳದೇ ಇರುವುದು.
ಇದು ಯಾಕೆ ಶಕ್ತಿಶಾಲಿ?
ಉಸಿರನ್ನು ನಿಲ್ಲಿಸಿದಾಗ ಮನಸ್ಸಿನ ಚಲನೆ ಸ್ವಲ್ಪ ನಿಧಾನವಾಗುತ್ತದೆ. ಆಲೋಚನೆಗಳು ಕಡಿಮೆ ಆಗುತ್ತವೆ, ಮತ್ತು ಆಂತರಿಕ ಶಾಂತಿಯ ಅನುಭವವಾಗುತ್ತದೆ.
ಚಿಕಿತ್ಯ ಪ್ರಯೋಜನಗಳು:
ಗಮನ ಹೆಚ್ಚಾಗುತ್ತೆ
ಪ್ಯಾರಾಸಿಂಪಥೆಟಿಕ್ ಸಿಸ್ಟಮ್ ಸಕ್ರಿಯಗೊಳಿಸುತ್ತದೆ
ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ
ಸಲಹೆ: ಶಾಂತವಾಗಿ, ಯಾವುದೇ ಬಲವಂತವಿಲ್ಲದೆ ಅಭ್ಯಾಸ ಮಾಡಿ. ಜೋರಾಗಿ ಉಸಿರಾಟ ಮಾಡಬೇಡಿ,ನಿಧಾನವಾಗಿ ಮಾಡಿ.
2. ಕುಂಭಕ ಪ್ರಾಣಾಯಾಮ:
ಕುಂಭಕ ಅಂದರೆ "ಹಿಡಿತ". ಈ ತಂತ್ರದಲ್ಲಿ, ಉಸಿರು ತೆಗೆದುಕೊಳ್ಳುವುದು ಮತ್ತು ಕೆಲವು ಸೆಕೆಂಡ್ ಗಳ ಕಾಲ ಉಸಿರನ್ನು ಹಿಡಿದಿಡುವುದು ಆಗಿದೆ.
ಇದು ಏಕೆ ಶಕ್ತಿಯುತ?
ಇದು ಆಮ್ಲಜನಕ ವಿನಿಮಯವಾಗುವುದನ್ನು ಸುಧಾರಿಸುತ್ತದೆ. ದೇಹದಲ್ಲಿ ಪ್ರಾಣ ಶಕ್ತಿಯ ಹರಿವು ಸಮತೋಲನಗೊಳ್ಳುತ್ತೆ.
ಚಿಕಿತ್ಯ ಪ್ರಯೋಜನಗಳು:
ಏಕಾಗ್ರತೆ ಸುಧಾರಣೆಯಾಗುತ್ತೆ
ಮೆದುಳಿಗೆ ಹೆಚ್ಚಿನ ಆಮ್ಲಜನಕ ತಲುಪುತ್ತೆ
ಶಕ್ತಿಯು ಹೆಚ್ಚಾಗುತ್ತೆ
ಸಲಹೆ: ಅತಿಯಾಗಿ ಉಸಿರು ಹಿಡಿಯುವುದನ್ನು ತಪ್ಪಿಸಿ, ನಿಧಾನವಾಗಿ ಮತ್ತು ಧೈರ್ಯದಿಂದ ಮಾಡಬೇಕು.
ಇದು ಯಾಕೆ ಪ್ರಭಾವಶಾಲಿ?
ಉಸಿರ ಬಿಡುವ ಕ್ರಿಯೆ ದೇಹದಿಂದ ಒತ್ತಡವನ್ನು ಹೊರತೆಗೆದು ಶಾಂತತೆ ತರುತ್ತದೆ. ಇದು ಆಧ್ಯಾತ್ಮಿಕತೆಯಲ್ಲೂ ಬಳಕೆಯಾಗುವ ಒಂದು ಪ್ರಾಣಾಯಾಮ ತಂತ್ರವಾಗಿದೆ.
ಚಿಕಿತ್ಯ ಪ್ರಯೋಜನಗಳು:
ಮನಸ್ಸಿಗೆ ವಿಶ್ರಾಂತಿ
ತಂತ್ರ ಹಾಗೂ ಲಯದೊಂದಿಗೆ ಮಾಡಿದರೆ ಹೆಚ್ಚು ಪ್ರಯೋಜನ
ಸಲಹೆ: ಎಣಿಕೆಯ ಜೊತೆ ಅಥವಾ ಜಪದೊಂದಿಗೆ ಅಭ್ಯಾಸ ಮಾಡಿದೆ ಹೆಚ್ಚು ಲಾಭ.
ಇದು ಯಾಕೆ ಶಕ್ತಿಶಾಲಿ?
ಇಡಾ ಹಾಗೂ ಪಿಂಗಲಾ ನಾಡಿಗಳನ್ನು ಸಮತೋಲನಗೊಳಿಸುತ್ತೆ. ಇದರಿಂದ ದೇಹ ಶೀತಶಕ್ತಿಯ ಹಾಗು ಉಷ್ಣಶಕ್ತಿಯ ಸಮತೋಲನ ಸಾದ್ಯವಾಗುತ್ತೆ.
ಚಿಕಿತ್ಯ ಪ್ರಯೋಜನಗಳು:
ತಾತ್ಕಾಲಿಕ ಒತ್ತಡ ಕಡಿಮೆಯಾಗುತ್ತೆ
ಉಸಿರಾಟ ಸಾಮರ್ಥ್ಯ ಸುಧಾರಣೆಯಾಗುತ್ತೆ
ಮನಸ್ಸು ಶಾಂತವಾಗುತ್ತೆ
ಸಲಹೆ: ನಿಧಾನವಾಗಿ, ಗಾಢವಾಗಿ ಮತ್ತು ಶಬ್ದವಿಲ್ಲದೆ ಅಭ್ಯಾಸಿಸಿ.
5. ಭ್ರಮರಿ ಪ್ರಾಣಾಯಾಮ:
ಇದು 'ಜೇನುನೋಣಗಳ ಶಬ್ದ' ಮಾಡುವ ತಂತ್ರ. ಕಿವಿಗಳನ್ನು ಮುಚ್ಚಿಕೊಂಡು "ಮ್ಮ್ಮ್" ಎಂಬ ಶಬ್ದ ಮಾಡುತ್ತಾ ಉಸಿರು ಬಿಡುವುದು.
ಇದು ಯಾಕೆ ಶಕ್ತಿಶಾಲಿ?
ಈ ಶಬ್ದದಿಂದ ಶಿರಸ್ನಾಯುಗಳು ಕಂಪಿಸುತ್ತವೆ. ಆ ಕಂಪನೆಯ ಮೂಲಕ ದೇಹ ಹಾಗೂ ಮನಸ್ಸು ಆಳವಾಗಿ ವಿಶ್ರಾಂತಿ ಪಡೆಯುತ್ತವೆ.
ಚಿಕಿತ್ಯ ಪ್ರಯೋಜನಗಳು:
ನಿದ್ರಾಹೀನತೆ, ತಲೆ ನೋವು, ಬಿಪಿ, ಇತ್ಯಾದಿಗಳು ಕಡಿಮೆಯಾಗುತ್ತವೆ.
ಆಂತರಿಕ ಶಾಂತತೆ ಹೆಚ್ಚಿಸುತ್ತದೆ.
ಸಲಹೆ: ಶಾಂತ ಸ್ಥಳದಲ್ಲಿ ಅಭ್ಯಾಸ ಮಾಡಿ ಬೆಳಗ್ಗೆ ಅಥವಾ ರಾತ್ರಿ ಉತ್ತಮ ಸಮಯ.
"ಚಲೇ ವಾತೇ ಚಲೇ ಚಿತ್ತಂ, ನಿಶ್ಚಲೇ ನಿಶ್ಚಲಂ ಭವೇತ್" ಎಂಬ ಹಠಯೋಗದ ಶ್ಲೋಕದಂತೆ, ಉಸಿರಾಟದ ನಿಯಂತ್ರಣದಿಂದ ಮನಸ್ಸು ಸ್ಥಿರವಾಗಬಹುದು. ಪ್ರತಿ ದಿನ 10-15 ನಿಮಿಷ ಈ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಹೆಚ್ಚು ಸ್ಪಷ್ಟತೆ, ಏಕಾಗ್ರತೆ ಮತ್ತು ಶಾಂತತೆ ಸಾಧ್ಯವಾಗುತ್ತದೆ.
ಡಿಜಿಟಲ್ ಡಿಟಾಕ್ಸ್, ಸಾತ್ವಿಕ ಆಹಾರ ಮತ್ತು ಯೋಗ ಆಸನಗಳ ಜೊತೆ ಈ ಪ್ರಾಣಾಯಾಮಗಳನ್ನು ಸೇರಿಸಿದರೆ, ನಿಮ್ಮ ಮಾನಸಿಕ ಆರೋಗ್ಯದ ಜೊತೆ ದೈಹಿಕ ಆರೋಗ್ಯವು ನಿಸ್ಸಂದೇಹವಾಗಿ ಸುಧಾರಿಸುತ್ತದೆ.